top of page

ಬಡ ದಲಿತರ ಜಮೀನು ಒತ್ತುವರಿ ಮಾಡಿಕೊಂಡಿರುವುದಲ್ಲದೆ ಅಕ್ರಮ ಆಸ್ತಿ ಸಂಪಾದಿಸಿರುವ ಸಕಲೇಶಪುರ ಕ್ಷೇತ್ರದ ಶಾಸಕರು

  • Mar 13, 2018
  • 1 min read

ಬಡ ದಲಿತರ ಜಮೀನು ಒತ್ತುವರಿ ಮಾಡಿಕೊಂಡಿರುವುದಲ್ಲದೆ ಅಕ್ರಮ ಆಸ್ತಿ ಸಂಪಾದಿಸಿರುವ ಸಕಲೇಶಪುರ ಕ್ಷೇತ್ರದ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಸುಳ್ಳುಗಾರ ಹಾಗೂ ಮೋಸಗಾರ'' ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಸಿ.ಸಣ್ಣಸ್ವಾಮಿ ಆರೋಪಿಸಿದರು.ಆಲೂರು ತಾಲೂಕು ಹಳ್ಳಿಯೂರು ಗ್ರಾಮದ ಸರ್ವೆ ನಂ 62,64, 67ರಲ್ಲಿ 15 ಜನರಿಗೆ ತಲಾ ಮೂರು ಎಕರೆ ಜಮೀನು ಮಂಜೂರಾಗಿದ್ದರೆ ಸುಳ್ಳು ದಾಖಲೆ ಹಾಗೂ ಪ್ರಭಾವ ಬೀರಿ ಕುಮಾರಸ್ವಾಮಿ ತಮ್ಮೊಬ್ಬರಿಗೆ ಹತ್ತು ಎಕರೆ ಮಂಜೂರು ಮಾಡಿಸಿಕೊಂಡಿದ್ದಾದರೂ ಹೇಗೆ? ಇದು ವಂಚನೆಯಲ್ಲವೇ?'' ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. 25 ವರ್ಷ ಶಾಸಕರಾಗಿ ಅಧಿಕಾರ ಅನುಭವಿಸುವ ಜತೆಗೆ ಬಡ ರೈತರ ಜಮೀನನ್ನು ಸಾಗುವಳಿ ಮಾಡದಂತೆ ಒತ್ತುವರಿ ಮಾಡಿಕೊಂಡು ಬೆದರಿಕೆ ಹಾಕುವುದು ಸಮಂಜಸವೇ? ತಾವು ಮಾಡುತ್ತಿರುವ ಆರೋಪ ಸುಳ್ಳು ಎನ್ನುವುದನ್ನು ಶಾಸಕರು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ'' ಎಂದು ಸವಾಲು ಹಾಕಿದರು.

ಸವಾಲಿಗೆ ಸಿದ್ಧವೇ?:

''ದಲಿತರಿಗೆ ಮಂಜೂರಾದ ಭೂಮಿಗೆ ಬೇಲಿ ಹಾಕಿಕೊಂಡು ಕಾಫಿ, ಏಲಕ್ಕಿ, ಮೆಣಸು ಬೆಳೆಯುತ್ತಿರುವ ಶಾಸಕರು ಗಂಗಾಕಲ್ಯಾಣ ಯೋಜನೆ ಪೈಪ್‌ಗಳನ್ನು ತಾವೇ ಅಧ್ಯಕ್ಷರಾಗಿರುವ ಎನ್‌ಸಿಪಿ ಯೋಜನೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಹಳ್ಳಿಯೂರು ಗ್ರಾಮದಲ್ಲಿ ಮಾಡಿರುವ ಅಕ್ರಮದ ಬಗ್ಗೆ ದಾಖಲೆಗಳನ್ನು ಹೊಂದಿದ್ದು ಶಾಸಕರು ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಬರುವುದಾದರೆ ಎಲ್ಲರ ಸಮ್ಮುಖದಲ್ಲಿ ಬಹಿರಂಗಗೊಳಿಸುತ್ತೇನೆ. ಕುಮಾರಸ್ವಾಮಿ ಅವರು ಸಿದ್ದರಿದ್ದಾರೆಯೇ'' ಎಂದು ಪ್ರಶ್ನಿಸಿದರು.

''ಬೇಲೂರು ತಾಲೂಕಿನಲ್ಲಿ ಶಾಸಕರಾಗಿದ್ದಾಗಲೂ ಬೇನಾಮಿ ಆಸ್ತಿ ಮಾಡಿದ್ದಾರೆ. ಕೋಗಿಲ ಮನೆ ಗ್ರಾಮದಲ್ಲಿ ಕುಮಾರ ವಿದ್ಯಾಸಂಸ್ಥೆ ಕಟ್ಟಡವನ್ನು ಸರ್ವೆ ನಂಬರ್‌ 164ರ ಗೋಮಾಳದಲ್ಲಿ 6 ಎಕರೆಯನ್ನು ಮಂಜೂರು ಮಾಡಿಸಿಕೊಂಡಿಲ್ಲವೇ?. ಬೆಂಗಳೂರು, ಮೈಸೂರಿನಲ್ಲಿ ಪತ್ನಿ ಹಾಗೂ ಮಗಳ ಹೆಸರಿಗೆ ಕೈಗಾರಿಕಾ ಪ್ರದೇಶದಲ್ಲಿ ಎಕರೆಗಟ್ಟಲೆ ಜಮೀನು ಮಂಜೂರು ಮಾಡಿಸಿಕೊಂಡಿಲ್ಲವೇ? ನೀವು ಇಲ್ಲ ಎಂದು ವಾದಿಸುವುದೇ ಆದಲ್ಲಿ ದಾಖಲೆಗಳೊಂದಿಗೆ ಸಾಬೀತು ಮಾಡಲು ಸಿದ್ಧನಿದ್ದೇನೆ. ಆಗಲಾದರೂ ನೀವು ರಾಜಕೀಯ ನಿವೃತ್ತಿ ಹೊಂದುವಿರಾ'' ಎಂದು ಪ್ರಶ್ನಿಸಿದರು. ''ಜಮೀನು ಒತ್ತುವರಿ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದ ಬಳಿಕ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಹಳ್ಳಿಯೂರಿಗೆ ಬಂದು ಬೀದಿಲಿ ಮರಾರ‍ಯದೆ ಹರಾಜು ಹಾಕುತ್ತಿದ್ದೀರಾ?. ಎರಡು ತಿಂಗಳು ಸುಮ್ಮನಿರಿ. ನಿಮ್ಮ ಭೂಮಿ ನಿಮಗೆ ಬಿಟ್ಟುಕೊಡುತ್ತೇನೆ ಎಂದು ಹೇಳಿದರು. ಅವರ ಮಾತಿನಲ್ಲಿ ನಂಬಿಕೆ ಬಾರದ ಕಾರಣ ಈಗಲೇ ಬಿಟ್ಟುಕೊಡಿ ಎಂದು ಒತ್ತಾಯಿಸಿದೆವು ಗ್ರಾಮಸ್ಥೆ'' ಎಂದು ರೇಖಾ ತಿಳಿಸಿದರು. ನಮ್ಮ ಬಳಿ ದಾಖಲೆಗಳೆಲ್ಲವೂ ಇದ್ದರೂ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದಾರೆ. ಕೇಳಲು ಹೋದರೆ ಧಮಕಿ ಹಾಕುತ್ತಾರೆ, ಸರ್ವೆ ಮಾಡಿ ಎಂದು ಅಧಿಕಾರಿಗಳಿಗೆ ಅರ್ಜಿಕೊಟ್ಟರೆ ರಾಜಕೀಯ ಪ್ರಭಾವ ಬೀರುತ್ತಾರೆ. ಜನರ ಸೇವೆಗೆ ಎಂದು ಆಯ್ಕೆಯಾದ ಶಾಸಕರು ಜನರಿಗೆ ದ್ರೋಹ ಬಗೆಯುವುದು ನ್ಯಾಯವಲ್ಲ ಈ ಕೂಡಲೇ ಭೂಮಿಯನ್ನು ವಾಪಸ್‌ ನೀಡಬೇಕು''ಎಂದು ಒತ್ತಾಯಿಸಿದರು.

Comments


!
Widget Didn’t Load
Check your internet and refresh this page.
If that doesn’t work, contact us.

© 2023 by Trademark.Proudly created with,Alpha Web Hosting

hassan connect kannada.png
bottom of page