top of page

ಶ್ರವಣಬೆಳಗೊಳದಲ್ಲಿ ಶತಮಾನದ ಎರಡನೇ ಮಹಾಮಸ್ತಕಾಭಿಷೇಕ ಮಹೋತ್ಸವ ಪೂರ್ಣ

  • Mar 16, 2018
  • 2 min read

ಶ್ರವಣಬೆಳಗೊಳದಲ್ಲಿ ಶತಮಾನದ ಎರಡನೇ ಮಹಾಮಸ್ತಕಾಭಿಷೇಕ ಮಹೋತ್ಸವ ಪೂರ್ಣಗೊಂಡ ನಂತರ ಮತ್ತೊಂದು ಮಹೋತ್ಸವಕ್ಕೆ ಚುರುಕಿನ ಸಿದ್ಧತೆಗಳು ಆರಂಭಗೊಳ್ಳುತ್ತಿವೆ. ಪ್ರತಿ ವರ್ಷದಂತೆ ಕ್ಷೇತ್ರದ ಪೀಠಾಧ್ಯಕ್ಷ ರಾದ ಸ್ವಸ್ತಿಶ್ರೀ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಾ.18 ರಿಂದ ಏಪ್ರಿಲ್‌ 2ರವರೆಗೆ ಲೋಕಕಲ್ಯಾಣಾರ್ಥವಾಗಿ ಭಗವಾನ್‌ ಶ್ರೀ ನೇಮಿನಾಥ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಸೇರಿದಂತೆ ನಾನಾ ಧಾರ್ಮಿಕ ಕಾರ‍್ಯಕ್ರಮಗಳು ನಡೆಯಲಿವೆ. ಈ ಅವಧಿಯಲ್ಲಿಯೇ ಗೊಮ್ಮಟೇಶ್ವರ ಭಗವಾನ್‌ ಬಾಹುಬಲಿ ಸ್ವಾಮಿಯ 1038ನೇ ಪ್ರತಿಷ್ಠಾಪನಾ ವರ್ಷಾಚರಣೆ ನಡೆಸಲು ಕ್ಷೇತ್ರ ಸನ್ನದ್ಧಗೊಂಡಿದ್ದು ಇದರೊಂದಿಗೆ ಶ್ರೀಗಳ 49ನೇ ವಾರ್ಷಿಕ ಪಟ್ಟಾಭಿಷೇಕ ವರ್ಧಂತಿ ಉತ್ಸವ, ನೇಮಿನಾಥ ತೀರ್ಥಂಕರರ ರಥೋತ್ಸವ ನಡೆಯಲಿದೆ. ಪ್ರತಿವರ್ಷ ಚೈತ್ರಶುದ್ಧ ಪಂಚಮಿಯಂದು ಬಾಹುಬಲಿಸ್ವಾಮಿಗೆ ಪ್ರತಿಷ್ಠಾಪನಾ ದಿನದ ಅಂಗವಾಗಿ ಪಾದಪೂಜೆ ನಡೆಯುತ್ತಿದ್ದು ಈ ಬಾರಿ ಮಾ.22ರಂದು ಪ್ರತಿಷ್ಠಾಪನಾ ವರ್ಷಾಚರಣೆ ಅಂಗವಾಗಿ ಮಹಾಮಸ್ತಕಾಭಿಷೇಕ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 6ಗಂಟೆಯಿಂದಲೇ ವಿಂಧ್ಯಗಿರಿಯಲ್ಲಿ ಧಾರ್ಮಿಕ ವಿಧಿ, ವಿಧಾನಗಳು ಕ್ರಮಬದ್ಧವಾಗಿ ನಡೆಯಲಿದೆ. ಪ್ರತಿಷ್ಠಾಚಾರ‍್ಯರ ಮೂಲಕ ಪಂಚಾಮೃತ ಅಭಿಷೇಕ ಶಾಸ್ತ್ರೋಕ್ತವಾಗಿ ಜರುಗಲಿದೆ. ಭಂಡಾರ ಬಸದಿಯಲ್ಲಿ ವಾರ್ಷಿಕ ಮಹಾಮಹೋತ್ಸವವು ಆಯೋಜನೆಗೊಂಡಿದೆ. ಮಾ.18ರಂದು ಭಂಡಾರ ಬಸದಿಯಲ್ಲಿ ನಾಂದಿಮಂಗಲ ಪೂಜೆ, ಕಂಕಣ ಬಂಧನದೊಂದಿಗೆ ಧಾರ್ಮಿಕ ವಿಧಾನಗಳು ಆರಂಭವಾಗಲಿದೆ. 19, 20ರಂದು ವಿಂಧ್ಯಗಿರಿಯ ಜಿನಾಲಯಗಳಲ್ಲಿ ನವಕಲಶ ಸಹಿತ ಪಂಚಾಮೃತ ಪೂಜೆ ಮತ್ತು ಆರಾಧನೆಗಳು 21 ಮತ್ತು 23 ರಂದು ಚಂದ್ರಗಿರಿಯ ಜಿನಾಲಯಗಳಲ್ಲಿ ಪೂಜೆ ಮತ್ತು ಆರಾಧನೆಗಳು ನಡೆಯಲಿದೆ. 24 ರಂದು ಮೃತ್ತಿಕಾ ಸಂಗ್ರಹ ಹಾಗೂ ಧ್ವಜಾರೋಹಣದೊಂದಿಗೆ ಬಸ್ತಿಹಳ್ಳಿ, ಬೆಕ್ಕ, ಕೆರೆಕೋಡಿಹೊಸಹಳ್ಳಿ, ಗುಹೆಪದ್ಮಾವತಿ, ಲಕ್ಕಿಬನದ ಜಿನಾಲಯಗಳಲ್ಲಿ ಅಭಿಷೇಕ ಮತ್ತು ಆರಾಧನೆ, 25 ರಂದು ಭಂಡಾರಬಸದಿಯಲ್ಲಿ 24 ತೀರ್ಥಂಕರರ ಆರಾಧನೆ, ಜಿನನಾಥಪುರ ಮತ್ತು ಊರಿನ ಜಿನಾಲಯಗಳಲ್ಲಿ ಅಭಿಷೇಕ, ಪೂಜೆ ನಡೆಯಲಿದೆ. 26 ರಂದು ನಿತ್ಯವಿಧಿ ಸಹಿತ ಯಾಗಮಂಡಲಾರಾಧನೆ, 27 ರಂದು ಗರ್ಭಾವತರಣ ಕಲ್ಯಾಣ ಮತ್ತು ದೇವೇಂದ್ರ ವಾಹನೋತ್ಸವ, 28 ರಂದು ಜನ್ಮಕಲ್ಯಾಣ ಮತ್ತು ಜನ್ಮಾಭಿಷೇಕ ಮಹೋತ್ಸವವಿದ್ದು ಸಂಜೆ ಚಾವುಂಡರಾಯಮಂಟಪದಲ್ಲಿ ಬಾಲಲೀಲಾ ಮಹೋತ್ಸವ. 29 ರಂದು ಭಗವಾನ್‌ ಮಹಾವೀರರ 2617ನೇ ಜಯಂತಿ ಪ್ರಯುಕ್ತ ಬೆಳ್ಳಿ ಪಲ್ಲಕ್ಕಿಯಲ್ಲಿ ಉತ್ಸವ ಮತ್ತು ಮಹಾವೀರ ತೀರ್ಥಂಕರರಿಗೆ ಅಭಿಷೇಕ, ಭಂಡಾರಬಸದಿಯಲ್ಲಿ ಪರಿನಿಷ್ಕ್ರಮಣ ಕಲ್ಯಾಣ, ದಿಗಂಬರ ಜೈನಮಠದಲ್ಲಿ ಸಿಂಹಾಸನ ಪೂಜೆ ಹಾಗೂ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ 49ನೇ ವಾರ್ಷಿಕ ಪಟ್ಟಾಭಿಷೇಕ ವರ್ಧಂತಿ ಉತ್ಸವ ಜರುಗಲಿದೆ. 30 ರಂದು ನಿತ್ಯವಿಧಿ ಸಹಿತ ಶಾಂತಿಚಕ್ರ ಯಂತ್ರಾರಾಧನೆ, ಚಂದ್ರಗಿರಿಯಲ್ಲಿ ಅಂತರಾಳ ಪಾಶ್ರ್ವನಾಥಸ್ವಾಮಿಗೆ ಮಸ್ತಕಾಭಿಷೇಕ, ಮಧ್ಯಾಹ್ನ ಭಂಡಾರಬಸದಿಯಲ್ಲಿ ಕೇವಲಜ್ಞಾನ ಕಲ್ಯಾಣ, ಋುಷಿಮಂಡಲ ಆರಾಧನೆ ಹಾಗೂ ರಾತ್ರಿ ಬಾಹುಬಲಿ ಮತ್ತು 24 ತೀರ್ಥಂಕರರ ಉತ್ಸವ ಜರುಗಲಿದೆ. 31ರಂದು ಮಹಾರಥಯಾತ್ರಾ ಮಹೋತ್ಸವದ ನಂತರ ಮಠದಲ್ಲಿ ಕೂಷ್ಮಾಂಡಿನಿ ಅಮ್ಮನವರಿಗೆ ಮಹಾಮಂಗಳಾರತಿ, ಧರ್ಮೋಪದೇಶ, ಸಂಗೀತ ಕಾರ‍್ಯಕ್ರಮಗಳು ನಡೆಯಲಿದೆ. ಏಪ್ರಿಲ್‌ 1 ರಂದು ಭಂಡಾರಬಸದಿಯಲ್ಲಿ ಮೋಕ್ಷ ಕಲ್ಯಾಣ ಮಹೋತ್ಸವ, ಲಘು ಸಿದ್ಧಚಕ್ರವಿಧಾನ, 24 ತೀರ್ಥಂಕರರಿಗೆ ಮಹಾಭಿಷೇಕ ಪೂಜೆ, ಮಧ್ಯಾಹ್ನ ವಿಂಧ್ಯಗಿರಿಯಲ್ಲಿ ಗೊಮ್ಮಟೇಶ್ವರಸ್ವಾಮಿಗೆ ಮಹಾಮಸ್ತಕಾಭಿಷೇಕ ಪೂಜಾ ಮಹೋತ್ಸವ, ಸಂಜೆ ಕಲ್ಯಾಣಿಯಲ್ಲಿ ತೆಪೊ್ಪೕತ್ಸವ ಜರುಗಲಿದೆ. ಏಪ್ರಿಲ್‌ 2ರಂದು ಧ್ವಜಾರೋಹಣ ಹಾಗೂ ವಸಂತೋತ್ಸವ ಸಂಜೆ ಮಹಾಶಿಲ್ಪಿ ಗೌರವ ಕಾರ‍್ಯಕ್ರಮಗಳು ನಡೆಯಲಿವೆ.

ಮಹಾವೀರ ಶಾಂತಿ ಪುರಸ್ಕಾರ: ರಾಜ್ಯ ಸರಕಾರವು ಕೊಡಮಾಡುವ ಮಹಾವೀರ ಶಾಂತಿ ಪ್ರಶಸ್ತಿಯನ್ನು ಶ್ರವಣಬೆಳಗೊಳ ಜೈನಕ್ಷೇತ್ರದ ಪೀಠಾಧ್ಯಕ್ಷ ರಾದ ಸ್ವಸ್ತಿಶ್ರೀ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಅವರಿಗೆ ನೀಡುವುದಾಗಿ ಈಗಾಗಲೇ ಪ್ರಕಟಿಸಿದೆ. ಮಹಾವೀರ ಜಯಂತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

Comments


!
Widget Didn’t Load
Check your internet and refresh this page.
If that doesn’t work, contact us.

© 2023 by Trademark.Proudly created with,Alpha Web Hosting

hassan connect kannada.png
bottom of page